ಸಮುದಾಯ ಸಹಭಾಗಿತ್ವ ಎಂಬುದು ಈ ದಿನಗಳಲ್ಲಿ ಬರೀ ಅಭಿವೃದ್ಧಿಯ ಧ್ಯೇಯವಾಕ್ಯವಾಗೇನೂ ಉಳಿದಿಲ್ಲ. ದಶಕಗಳ ಹಿಂದೆ ಅದೇನಿದ್ದರೂ ಬರೀ ಮಾತನಾಡುವ ಮತ್ತು ದೇಣಿಗೆ ನೀಡುವ ಸಂಸ್ಥೆಗಳಿಗೆ ಸಲ್ಲಿಸುವ ಪ್ರಸ್ತಾವದಲ್ಲಿ ಬರೆಯುತ್ತಿದ್ದ ಪದ ಮಾತ್ರ ಆಗಿತ್ತು. ಕಾಲ ಕ್ರಮೇಣ ಅದರ ಪ್ರಭಾವ ಮತ್ತು ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲಾರಂಭಿಸಿದ ಸರ್ಕಾರೇತರ ಸಂಸ್ಥೆಗಳು ಈ ವ್ಯವಸ್ಥೆಯನ್ನು ತಮ್ಮ ಕಾರ್ಯಕ್ರಮಗಳ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡವು.
0 Comments
ಡಾ.ಎಚ್.ಎಸ್. ದೊರೆಸ್ವಾಮಿಯಂಥವರನ್ನು ನೆನೆದಾಗಲೆಲ್ಲಾ ನನಗೆ ವಿ.ಸೀ. ಅವರ ಕವಿತೆಯೊಂದರ ಈ ಐದು ಸಾಲುಗಳು ನೆನಪಾಗುತ್ತವೆ.
ಮಣಿಯದಿಹ ಮನವೊಂದು ಸಾಧಿಸುವ ಹಟವೊಂದು ನಿಜದ ನೇರಕೆ ನಡೆವ ನಿಶ್ಚಲತೆಯೊಂದು ಅನ್ಯಾಕೆಂದೆಂದು ಬಾಗದೆಚ್ಚರವೊಂದು ಮರುಕಕ್ಕೆ, ಪ್ರೇಮಕ್ಕೆ ಚಿರ ತೆರೆದ ಎದೆಯೊಂದು ಈ ಸಾಲುಗಳ ಸಾರಸತ್ತ್ವದ ಸಾಕಾರವೆಂದರೆ ದೊರೆಸ್ವಾಮಿಯವರು. ನೀಳವಾದ ದೇಹ, ಆಜಾನು ಬಾಹು, ಗಿಣಿ ಮೂಗಿನಂತೆ ಕೊಂಚ ಬಾಗಿದ ಮೂಗು, ಅಗಲ ಮುಖ, ವಯಸ್ಸನ್ನು ಅಲ್ಲಗಳೆವ ಹೊಳಪಿನ ಕಣ್ಣುಗಳು, ಧೀರ ಹೆಜ್ಜೆ, ಕಂಚಿನ ಕಂಠ, ಸದೃಢವಾದ ನಂಬುಗೆ, ಖಚಿತಪಡಿಸಿಕೊಂಡಾದ ಮೇಲೆ ಆಡುವ ದಿಟ್ಟ ನುಡಿ, ಯಾರಿಗೂ ಯಾವುದಕ್ಕೂ ಅಂಜದ ಧೈರ್ಯ, ಕಿರಿಯರಿರಲಿ-ಹಿರಿಯರಿರಲಿ ಎಲ್ಲರೊಡನೆಯೂ ಸಸ್ನೇಹವಾದ ಸಂವಾದ, ಶೋಷಣೆ-ಅಪಚಾರ- ಅಸತ್ಯದ ನಡತೆಯ ವಿರುದ್ಧ ಸಿಡಿದೇಳುವ, ಮುನ್ನಡೆಯುವ ಛಲ, ಇತ್ಯಾದಿ, ಸಮ್ಮಿಲನಗೊಂಡ ಮೈ-ಮನದ ಮಾನವಾಕೃತಿಯೇ ದೊರೆಸ್ವಾಮಿ. ಇವರಿಗೆ ತೊಂಬತ್ತು ಸಂವತ್ಸರಗಳು ತುಂಬಿ ಮುನ್ಚಾಚಿದ ವಯಸ್ಸು ಎಂದು ತಿಳಿದ, ಅವರಿಗಿಂತ ಹದಿಮೂರು ವರ್ಷ ಕಿರಿಯನಾದ, ನನಗೆ ಅಗಾಧವಾದ ಈರ್ಷ್ಯೆ. ಅವರ ಸತ್ತ್ವದಲ್ಲಿ ಒಂದಿನಿತು ನನ್ನಂಥವರಿಗೆ ಇವರು ಕೊಡಬಹುದಿತ್ತಲ್ಲವೆ ಅನ್ನಿಸುತ್ತದೆ. ಇವರನ್ನು ಹೋಗಿ ಕಾಣಲು ನಾನು ಹಿಂದು-ಮುಂದು ನೋಡುತ್ತೇನೆ; ನಾಚುತ್ತೇನೆ. ಅವರ ಕಡೆ ಕೋಲೂರಿಕೊಂಡು ಹೋಗುವುದು ಕನಿಕರದ ಕಷ್ಟವಲ್ಲವೆ? ಮಾನವ ಸಮಾಜಜೀವಿ ಹಾಗೂ ಸಮೂಹ ಜೀವಿ. ಆತ ಒಬ್ಬಂಟಿಗನಾಗಿ ಬದುಕಲಾರ. ಹಾಗೆ ಬದುಕಿದರೂ ಹೊಟ್ಟೆಯ ಆವಶ್ಯಕತೆ ನೀಗಿಸಬೇಕು. ಬಡತನದಲ್ಲಿ ಜೀವನ ಸಾಗಿಸುವುದು ಹೊಟ್ಟೆಗಾದರೆ ತಂದೆ-ತಾಯಿಗಳ ಪಾಲನೆ-ಪೋಷಣೆ ಮಾಡಿಕೊಂಡು ಹಂತ-ಹಂತವಾಗಿ ಅಭಿವೃದ್ಧಿ ಕಾಣಬೇಕೆಂಬ ಆಕಾಂಕ್ಷೆ ಪ್ರತಿಯೊಬ್ಬರಲ್ಲೂ ಇರುತ್ತದೆ. ತನ್ನ ಸ್ವದೇಶದಲ್ಲಿ ಇಂತಹ ತೃಪ್ತಿ ಸಿಗದೆ ಹೋದಾಗ ವಿದೇಶಗಳನ್ನು ಆಶ್ರಯಿಸಿ ಅರೆಹೊಟ್ಟೆ ಅರೆಬಟ್ಟೆಯ ತಾಪತ್ರಯ ನೀಗಿಸಿಕೊಳ್ಳುವುದಕ್ಕಾಗಿ ಹುಟ್ಟೂರಿನಿಂದ ಕಾಲ್ತೆಗೆಯುವುದು ಸಹಜ. ಆದರೆ ಪ್ರಾಚೀನ ನಾಗರಿಕತೆಯಲ್ಲಿ ಮಾನವ ಜೀವನ ಸುಧಾರಣೆಗಾಗಿ ನದಿ ತೀರಗಳನ್ನರಸಿ ವಲಸೆ ಹೋಗುತ್ತಿದ್ದ, ಆದರೆ ಇಂದಿನ ಪರಿಸ್ಥಿತಿಗಳು ಭೋಗವನ್ನರಸಿ ವಲಸೆ ಹೋಗುವ ಸ್ಥಿತಿಗಳು ನಿರ್ಮಾಣಗೊಂಡಿವೆ.
ಪೀಠಿಕೆ:-
ಈ ದೇಶದ ಕಡುಬಡವರು ಹಸಿವಿನ ಯಾತನೆ ಮತ್ತು ನರಳುವಿಕೆಯಿಂದ ಮುಕ್ತರಾದಾಗ ಮಾತ್ರ ಭಾರತ ನಿಜವಾದ ಸ್ವಾತಂತ್ರ್ಯವನ್ನು ಹೊಂದುತ್ತದೆ" ಎಂದು ಗಾಂಧೀಜಿಯವರು ಹೇಳಿದ ಮಾತಿನಂತೆ ಸಾದರಪಡಿಸಿ ನಿರುದ್ಯೋಗದ ಪ್ರಮಾಣವನ್ನು ಕಡಿಮೆ ಮಾಡಬೇಕು. ಅಂದರೆ ದುಡಿಯುವ ಶಕ್ತಿ ಇರುವ ಜನರಿಗೆ ದುಡಿದು ಸಂಪಾದಿಸುವ ಅವಕಾಶಗಳನ್ನು ಕಲ್ಪಿಸಿಕೊಡಬೇಕು. ಹೆಣ್ಣಿನ ಸಾರ್ಥಕತೆ ಇರುವುದು ತಾಯಿಯಾಗುವುದರಲ್ಲಿ ಎನ್ನುವ ಮಾತು ಇಂದು ನಿನ್ನೆಯದಲ್ಲ. ಪ್ರತಿಯೊಬ್ಬ ಹೆಣ್ಣಿನ ಬಯಕೆಯೂ ಇದೇ ಆಗಿರುತ್ತದೆ. ಅದಕ್ಕಾಗಿ ಕಾಯುತ್ತಾಳೆ, ಆ ಸಂಭ್ರಮಕ್ಕಾಗಿ ತನ್ನ ಒಡಲಿನ ರಕ್ತವನ್ನೇ ಬಸಿಯುತ್ತಾಳೆ. ಆ ಮುದ್ದು ಮುಖವನ್ನು ನೋಡುತ್ತಾ ತನ್ನೆಲ್ಲ ನೋವನ್ನು ಮರೆಯುತ್ತಾಳೆ. ತಾಯಿಯಾಗುವ ಪ್ರತಿಯೊಬ್ಬ ಹೆಣ್ಣಿನ ಬಯಕೆಯ ಹಿಂದೆ ಕುಟುಂಬ ಹಾಗೂ ಸಮಾಜದ ಕಟ್ಟುಪಾಡುಗಳು ನೆರಳಿನಂತೆ ಹಿಂಬಾಲಿಸುತ್ತವೆ
ಕೆಲವರಿಗೆ ತಾಯಿಯಾಗುವ ಆಸೆ ಕೈಗೂಡುವುದೇ ಇಲ್ಲ. ಅದಕ್ಕಾಗಿ ಅಂತಹವರು ಪರಿತಪಿಸುತ್ತಾ ಕೂಡುವ ಬದಲು ಮಗುವೊಂದನ್ನು ದತ್ತು ತೆಗೆದುಕೊಂಡು ಅದಕ್ಕೊಂದು ಜೀವನಾಧಾರ ಕಲ್ಪಿಸುವುದು ಒಂದು ಒಳ್ಳೆಯ ಧ್ಯೇಯ. ಸ್ವಯಂಸೇವಾಸಂಸ್ಥೆಗಳು ಸಾಮಾಜಿಕ ಅಭ್ಯುದಯದಲ್ಲಿ ತನ್ನದೆ ಆದ ಪರಿಣಾಮಕಾರಿ ಪಾತ್ರವನ್ನು ವಹಿಸುತ್ತಿವೆ. ಜನಸಂಖ್ಯಾಸ್ಫೋಟದ ಜೊತೆಯಲ್ಲೇ ಹೆಚ್ಚುತ್ತಿರುವ ಸಮಸ್ಯೆಗಳನ್ನು ಪರಿಹರಿಸುವುದು ಸುಲಭಸಾಧ್ಯವಲ್ಲ. ಸರ್ಕಾರವೊಂದನ್ನೇ ನಂಬಿಕೊಂಡು ಕೂರುವುದು ಕೂಡಾ ಸಾಧುವಲ್ಲ. ಈ ನಿಟ್ಟಿನಲ್ಲಿ ಸರ್ಕಾರದ ಜೊತೆಜೊತೆಯಲ್ಲಿ ಜನರ ಬಾಧೆಗಳನ್ನು ನಿವಾರಿಸಲು, ಸಾಮಾಜಿಕ ಕಳಕಳಿಯಿರುವ ಮಂದಿ ಒಗ್ಗೂಡಿ ರಚಿಸಿಕೊಂಡಿರುವ ಸಂಘಟನೆಯೇ ಸ್ವಯಂಸೇವಾಸಂಸ್ಥೆ.
ದಾಸ್ಯ ಮತ್ತು ಭ್ರಷ್ಟಾಚಾರ ಮುಕ್ತ ರಾಷ್ಟ್ರಕ್ಕಾಗಿ ಹೋರಾಡುವ ಡಾ. ದೊರೆಸ್ವಾಮಿ - ಸಾಮಾಜಿಕಕಾರ್ಯ ಮತ್ತು ನಾನು7/16/2017 ಕೊಳಚೆ ವಾತಾವರಣದಲ್ಲಿರುವ ಇವರನ್ನು ಊರ ಹೊರಗೆ ಓಡಿಸಿದರೆ, ಇವರು ಸುಧಾರಿಸುವುದಾದರೂ ಹೇಗೆ? ಸುಧಾರಿಸಿರುವ ಜನರೊಡನೆ ಇದ್ದರೆ ಇವರೂ ಕಾಲಕ್ರಮದಲ್ಲಿ ಬದಲಾವಣೆಯಾಗಬಹುದು ಎಂಬುದು ನನ್ನ ವಿಚಾರ. ಆದ್ದರಿಂದ ಅವರನ್ನೆಲ್ಲ ಅಲ್ಲಿಉಳಿಸಿಕೊಳ್ಳುವ ವಿಚಾರ ಮಾಡಿದೆ. ಎಚ್.ಎಸ್. ದೊರೆಸ್ವಾಮಿ, ಹಿರಿಯ ಸ್ವಾತಂತ್ರ್ಯ ಹೋರಾಟಗಾರರು
ನಾನು ಹೈಸ್ಕೂಲಿನಲ್ಲಿದ್ದಾಗ ವಿಶ್ವೇಶ್ವರಪುರದಲ್ಲಿ `ಕಿರಿಯ ತರುಣರ ಸಂಘ' ಎಂಬ ಸಂಸ್ಥೆಯನ್ನು ನಾವೆಲ್ಲ ಸೇರಿ ಆರಂಭ ಮಾಡಿದೆವು. ನಮಗಾಗಲೇ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಪರಿಚಯವಾಗಿತ್ತು. ಆದ್ದರಿಂದ ನಾವು ನಮ್ಮ ಸಂಘದ ವತಿಯಿಂದ ಬೆಂಗಳೂರಿನಲ್ಲಿರುವ ಸಾಹಿತಿಗಳನ್ನು ನಮ್ಮ ಸಂಘಕ್ಕೆ ಕರೆತಂದು, ಅವರ ಪರಿಚಯ ಮಾಡಿಕೊಡುವುದರ ಜೊತೆಗೆ ಅವರ ಅನೇಕ ಉಪನ್ಯಾಸಗಳನ್ನು ಏರ್ಪಡಿಸುತ್ತಿದ್ದೆವು. ಬೇಸಿಗೆಯ ರಜೆಯಲ್ಲಿ ಓದುವ ಹವ್ಯಾಸವನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲು ಹಾಗೂ ಕ್ರೀಡೆಗಳಲ್ಲಿ ತೊಡಗಿಕೊಳ್ಳುವಂತೆ ಮಾಡಲು ಪ್ರಯೋಗಗಳನ್ನು ಮಾಡಿದೆವು. ಮನೆಯವರು ಹೊರಹಾಕಿದರು, ಸುತ್ತಮುತ್ತಲಿನವರು ನಿಂದಿಸುತ್ತಿದ್ದರು, ಇವೆಲ್ಲದಕ್ಕಿಂತಾ ನನಗೆ ಹೆಚ್ಚಾಗಿ ಕಾಣಿಸುತ್ತಿದ್ದದ್ದು ಏನು ತಪ್ಪೇ ಮಾಡಿರದ ನನ್ನ ಮುದ್ದು ಮಗಳ ಭವಿಷ್ಯ. ತಪ್ಪೆಂದರೆ ಏನೆಂಬುದನ್ನು ಅರಿಯದ ವಯಸ್ಸಿನಲ್ಲಿ ತನ್ನದಲ್ಲದ ತಪ್ಪಿಗೆ ಸ್ನೇಹಿತರು, ಸಂಬಂಧಿಗಳೂ, ನೆರೆಹೊರೆಯವರೆಲ್ಲರಿಂದ ದೂರವಿಡಲ್ಪಟ್ಟಿದ್ದಾಳೆ. ಏಕಪ್ಪ ರಮ, ಸುಮ, ಇವರೆಲ್ಲಾ ನನ್ನ ಜೊತೆ ಆಟ ಆಡಲು ಬರುವುದಿಲ್ಲ? ಕೇಳಿದರೆ ನಮ್ಮ ಅಮ್ಮ ಬೈತಾರೆ ಅಂತಾರಲ್ಲ ಯಾಕೆ? ಎಂಬ ನನ್ನ ಮಗಳ ಪ್ರಶ್ನೆಗೆ ಹೇಗೆ ಉತ್ತರಿಸಲಿ ತಿಳಿಯಲಿಲ್ಲ. ಆದರೆ ಇಂದು ನನ್ನವರೆಲ್ಲಾ ನನಗೆ ಮತ್ತೆ ಸಿಕ್ಕಿದ್ದಾರೆ. ನಾನು ಕಳೆದುಕೊಂಡಿದ್ದ ಸಂತೋಷ ನನಗೆ ಸಿಕ್ಕಿದೆ.
ಇದರ ಮೊದಲನೆಯ ಭಾಗ ಹಿಂದಿನ ಸಂಚಿಕೆಯಲ್ಲಿ ಪ್ರಕಟವಾಗಿದೆ. ಪರಾವಲಂಬನಾ ಭಾವ
ಸಾಮಾನ್ಯವಾಗಿ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ನಡೆಸುವ ಹೋರಾಟವೇ ಜೀವನ. ಪ್ರತಿಯೊಬ್ಬರಿಗೂ ಜೀವಿಸಲು ಆಹಾರ, ಬಟ್ಟೆ, ವಸತಿ, ರಕ್ಷಣೆ, ಶಿಕ್ಷಣ, ಮನರಂಜನೆ ಮುಂತಾದ ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳಲು ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಆಹಾರಕ್ಕಾಗಿ ರೈತ, ವ್ಯಾಪಾರಿ, ಸಂಚಾರ ವ್ಯವಸ್ಥೆ ನೋಡಿಕೊಳ್ಳುವವರು, ರಸ್ತೆಗಳನ್ನು ಮಾಡುವವರು, ಇತ್ಯಾದಿ ವೃತ್ತಿನಿರತರನ್ನು ಅವಲಂಬಿಸಬೇಕಾಗುತ್ತದೆ. ಬಟ್ಟೆಗೆ ಪುನಃ ರೈತ, ವ್ಯಾಪಾರಿ, ಬಟ್ಟೆ ಗಿರಣಿ ಮಾಲಿಕ, ಕೆಲಸಗಾರರು, ವಿತರಕ ಇತ್ಯಾದಿ ಕೆಲಸಗಳನ್ನು ಮಾಡುವುದರ ಮೂಲಕ ನಮಗೆ ಸಹಾಯ ಮಾಡುವವರನ್ನು ಅವಲಂಬಿಸಬೇಕಾಗುತ್ತದೆ. ಇದರಂತೆಯೇ ಇತರೆ ಜೀವನಾವಶ್ಯಕತೆಗಳನ್ನು ಪೂರೈಸಿಕೊಳ್ಳಲು ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ. ಪ್ರತಿಯೊಂದು ಸಮುದಾಯದಲ್ಲಿಯೂ ಸದಸ್ಯರು ತಮ್ಮ ದೈನಂದಿನ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಹೀಗೆ ಸಮುದಾಯದ ಮೇಲೆ ಅವಲಂಬಿತರಾಗಿರುತ್ತಾರೆ. ಹಾಗಾಗಿ ಸದಸ್ಯರು ತಮ್ಮ ಜೀವನದ ಆಗುಹೋಗುಗಳಿಗಾಗಿ ಇನ್ನೊಬ್ಬರಿಂದ ಅವಲಂಬಿತರಾಗಿರುತ್ತಾರೆ. ಸದಸ್ಯರು ತಮ್ಮ ಜೀವನಕ್ಕೆ ಇತರರನ್ನು ಇಷ್ಟು ಪ್ರಮಾಣದಲ್ಲಿ ಅವಲಂಬಿತರಾಗಿರುವುದರಿಂದ, ಅವರು ತಮ್ಮ ಸ್ವಂತ ಅಸ್ತಿತ್ವ ಇಲ್ಲವೇನೋ ಎಂಬಂತೆ ವರ್ತಿಸುತ್ತಾರೆ. (ಆದರೂ ಪ್ರತಿಯೊಬ್ಬರಿಗೂ ಸ್ವತಂತ್ರ ವ್ಯಕ್ತಿತ್ವ ಇದ್ದೇ ಇರುತ್ತದೆ) ಇದು ಪರಾವಲಂಬನಾ ಭಾವ. 1. ನಿಮ್ಮ ಉದ್ಯೋಗ/ವೃತ್ತಿಯನ್ನು ವಿವರಿಸಿ?
ನಾನು ಅರ್ಪಿತ ಅಸೋಸಿಯೇಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಈಎಫ್ಐಎಲ್ ಎಜುಕೇಷನಲ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕಿಯಾಗಿದ್ದೇನೆ. ನಾನು ಲೇಖಕಿಯಾಗಿ, ಸಂಶೋಧಕಿಯಾಗಿ ಮತ್ತು ಸಾಂಸ್ಥಿಕ ಅಭಿವೃದ್ಧಿಯಲ್ಲಿ ಮಧ್ಯಸ್ಥಿಕೆ ವಹಿಸುವ ವಿಷಯದಲ್ಲಿ ತರಬೇತುದಾರಳಾಗಿ, ಭೋಧಕಿಯಾಗಿ, ವಿನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. 2. ಈ ಉದ್ಯೋಗಕ್ಕೆ ಅವಶ್ಯಕವಿರುವ ವಿದ್ಯಾರ್ಹತೆ ಏನು? ಪ್ರಕ್ರಿಯೆ ತರಬೇತಿ, ಮಾನವ ಸಂಪನ್ಮೂಲ ಕ್ಷೇತ್ರಗಳಲ್ಲಿ ಪ್ರಮಾಣೀಕರಣಗಳೊಂದಿಗೆ ಎಂ.ಎಸ್.ಡಬ್ಲ್ಯೂ ಮತ್ತು ಪಿಎಚ್.ಡಿ ಪದವಿ ಮತ್ತು ತಂತ್ರಜ್ಞಾನ ಮತ್ತು ಜನರ ನಿರ್ವಹಣೆಯಲ್ಲಿ ಹೆಚ್ಚುವರಿ ತರಬೇತಿ ಹೊಂದಿರಬೇಕು. ಗಣಿ ಕಾರ್ಮಿಕರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗತಿಗಳು - ಕೆ.ಜಿ.ಎಫ್.ನಲ್ಲಿನ ಭಾರತ್ ಗೋಲ್ಡ್ ಮೈನ್ಸ್ ಲಿಮಿಟೆಡ್7/8/2017 ಪರಿಚಯ
ಗಣಿ ಕಾರ್ಮಿಕರು ಈ ದೇಶದ ಅಭಿವೃದ್ಧಿಗಾಗಿ ಬೆನ್ನೆಲುಬಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಅವಲಂಬಿತರ ಪೋಷಣೆಗಾಗಿ ಅವರ ದೈನಂದಿನ ಬದುಕನ್ನು ಸುತ್ತಲಿನ ಸಮುದಾಯಗಳೊಂದಿಗೆ ಸಮೀಕರಿಸಿಕೊಂಡು, ಈ ದೇಶದ ಒಂದು ಭಾಗವಾಗಿ ಜೀವಿಸುತ್ತಿದ್ದಾರೆ. ಇಂದಿನ ವೈಜ್ಞಾನಿಕತೆ, ತಂತ್ರಜ್ಞಾನ ಮತ್ತು ಆಧುನಿಕತೆಗಳಿಗೆ ಹೊಂದಿಕೊಳ್ಳಲಾಗದೆ ಹಾಗೂ ಜೀವನವನ್ನು ಬಿಟ್ಟುಕೊಡಲಾಗದಂತಹ ಪರಿಸ್ಥಿತಿಗಳಲ್ಲಿ ಜೀವನ ಸಾಗಿಸುತ್ತಿದ್ದಾರೆ. ಗಣಿ ಕಾರ್ಮಿಕರ ಬೌದ್ಧಿಕ ಚಿಂತನೆ, ಆಲೋಚನೆ ಹಾಗೂ ಆಕಾಂಕ್ಷೆಗಳೆಲ್ಲವು ತಮ್ಮ ಸುತ್ತಲಿನ ಪರಿಸರದೊಂದಿಗೆ ಕೇಂದ್ರೀಕೃತಗೊಂಡು, ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ವಿಸ್ತ್ರೃತಗೊಂಡಂತೆಲ್ಲಾ ಗಣಿ ಕಾರ್ಮಿಕರ ಬೌದ್ಧಿಕತೆಯು ಸಂಕೀರ್ಣಗೊಳ್ಳುತ್ತಾ ತನ್ನ ಸುತ್ತಲಿನ ಸಮುದಾಯಗಳನ್ನು ಪ್ರಶ್ನಿಸುವ, ಪರೀಕ್ಷಿಸುವ ಹೊಸ ಹೊಸ ನಿರೀಕ್ಷೆಗಳನ್ನು ಅದರ ಮೇಲೆ ಪ್ರಯೋಗಿಸುವ, ಪ್ರಯೋಗ ಶಾಲೆಯನ್ನಾಗಿ ಸಮಾಜವನ್ನು ರೂಪಿಸಿಕೊಂಡವರು. ಆಧುನಿಕತೆ, ತಂತ್ರಜ್ಞಾನ ಮತ್ತು ವೈಜ್ಞಾನಿಕತೆಗಳು ತನ್ನ ಮಹಾತ್ವಾಕಾಂಕ್ಷೆಗಳ ವಿಶ್ಲೇಷಣೆಗೆ ಮುಂದಾದಾಗ ಗಣಿ ಕಾರ್ಮಿಕರು ತಮ್ಮ ಮೂಲವೃತ್ತಿ ಹಾಗೂ ಮೂಲ ನೆಲೆಯು ಸ್ಥಿತ್ಯಂತರಕ್ಕೆ ಒಳಗಾಗಿ ಅನೇಕ ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗಬೇಕಾಯಿತು. ಇಂತಹ ಪರಿಸ್ಥಿತಿಯಲ್ಲಿಯು ಸಹ ದೇಶದಲ್ಲಿನ ಅನೇಕ ಗಣಿಗಳು ಮುಚ್ಚಿದ್ದು ಅಂತಹ ಗಣಿ ಕಾರ್ಮಿಕರು ಗಣಿ ಕೈಗಾರಿಕೆಯನ್ನೇ ತಮ್ಮ ಜೀವನಾಧಾರವಾಗಿ ನಂಬಿಕೊಂಡು ಜೀವನ ಮಾಡುತ್ತಿದ್ದ ಅನೇಕ ಗಣಿ ಕಾರ್ಮಿಕರು ಇಂದು ಸಾಮಾಜಿಕ ಮತ್ತು ಆರ್ಥಿಕ ಸಂಕಷ್ಟಗಳಿಗೆ ಗುರಿಯಾಗಿರುವವರು ಈ ದೇಶದಾದ್ಯಂತ ಕಾಣಸಿಗುತ್ತಾರೆ. ಸಾರಾಂಶ
ದೈಹಿಕ ಚಟುವಟಿಕೆ ಎಂಬುದು ಇತ್ತೀಚೆಗೆ ಒಂದು ಪ್ರಮುಖ ಆರೋಗ್ಯ ಸೂಚಕ ಅಂಶಗಳಲ್ಲಿ ಒಂದಾಗಿದೆ. ಯುವ ವಯಸ್ಕರಲ್ಲಿ ಅದರಲ್ಲೂ ಪದವಿ ವಿದ್ಯಾರ್ಥಿನಿಯರಲ್ಲಿ ದೈಹಿಕ ಚಟುವಟಿಕೆಯಲ್ಲಿ ವ್ಯಾಯಾಮ ಚಟುವಟಿಕೆ ಯಾವ ಮಾದರಿಯಲ್ಲಿ ಇದೆ ಎಂದು ಅಧ್ಯಯನ ಮಾಡುವುದು ಈ ಅಧ್ಯಯನದ ಉದ್ದೇಶವಾಗಿದೆ. ಸರಳ ಯಾದೃಚ್ಛಿಕ ಮಾದರಿಯ ಮೂಲಕ ಶಿವಮೊಗ್ಗ ನಗರದ ಪ್ರಥಮ ದರ್ಜೆ ಕಾಲೇಜಿನ ಪದವಿ ವಿದ್ಯಾರ್ಥಿನಿಯರಲ್ಲಿ ಬಿಎ, ಬಿಕಾಂ, ಬಿಎಸ್ಸಿ ತರಗತಿಗಳಿಂದ 19 ರಿಂದ 23 ವಯಸ್ಸಿನ ಅವಧಿಯ ತಲಾ 15 ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಂಡು ಅಧ್ಯಯನದಲ್ಲಿ ತೊಡಗಿಸಿಕೊಳ್ಳಲಾಗಿದೆ. ಒಟ್ಟು 45 ವಿದ್ಯಾರ್ಥಿನಿಯರನ್ನು ಕುರಿತು ಅಧ್ಯಯನ ಕೈಗೊಳ್ಳಲಾಗಿದೆ. ಸಂದರ್ಶನ ಅನುಸೂಚಿ ತಯಾರಿಸುವುದರ ಮೂಲಕ, ಮಾದರಿಗಳನ್ನು ಸಂದರ್ಶನ ಮಾಡುವುದರ ಮೂಲಕ ಮಾಹಿತಿ ಸಂಗ್ರಹಿಸಲಾಗಿದೆ. ದೈಹಿಕ ಚಟುವಟಿಕೆಯಲ್ಲಿ ವಿದ್ಯಾರ್ಥಿನಿಯರು ವ್ಯಾಯಾಮಕ್ಕೆ ಆಯ್ಕೆ ಮಾಡುವ ಸಮಯ, ವ್ಯಾಯಾಮದ ಮಾಹಿತಿಯ ಮೂಲ, ಯಾವ ರೀತಿಯ ವ್ಯಾಯಾಮದ ಆಯ್ಕೆ ಮಾಡುತ್ತಾರೆ, ವ್ಯಾಯಾಮ ಮಾಡದಿದ್ದರೆ ಅದಕ್ಕೆ ಕಾರಣಗಳೇನು ಎಂದೂ ತಿಳಿಯಲಾಗಿದೆ. ಪ್ರಮುಖ ಪದಗಳು : ದೈಹಿಕ ಚಟುವಟಿಕೆ, ವ್ಯಾಯಾಮ, ವಿದ್ಯಾರ್ಥಿನಿಯರು, ಆರೋಗ್ಯ. ಈ ಪುಸ್ತಕವು ಸಮಾಜ ವಿಜ್ಞಾನ ಹಾಗೂ ಮಾನವಿಕ ಪರಿಭಾಷೆಗಳ ಕುರಿತಾದ ಪುಸ್ತಕವಾಗಿದೆ. ಇದು ವಿದ್ಯಾರ್ಥಿಗಳಿಗೆ ಮತ್ತು ಜನಸಾಮಾನ್ಯರಿಗೆ ಬಹಳ ಉಪಯುಕ್ತವಾದ ಪುಸ್ತಕವಾಗಿದೆ. ಸಾಮಾಜಿಕ ಮತ್ತು ಮಾನವಿಕ ಅಧ್ಯಯನ ಶಾಖೆಗಳಲ್ಲಿ ಆಸಕ್ತರಾಗಿರುವ ವಿದ್ಯಾರ್ಥಿಗಳು ಎದುರಿಸುತ್ತಿರುವ ಕೊರತೆಯೊಂದನ್ನು ನೀಗಿಸಲು ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಕೈಗೆತ್ತಿಕೊಂಡ ಯೋಜನೆಯ ಫಲಿತವೇ ಈ ಪುಸ್ತಕ. ಈ ಪುಸ್ತಕದ ಸಂಪಾದಕರು ಈ ಯೋಜನೆಯ ರೂಪುರೇಷೆಗಳನ್ನು ಅವರ ಬರೆಹದಲ್ಲಿ ವಿವರಿಸಿದ್ದಾರೆ. ಸಮಾಜ ಮತ್ತು ಸಂಸ್ಕೃತಿ ಸಂಶೋಧನೆಗಳಲ್ಲಿ ಸಿದ್ಧಾಂತ, ಪರಿಭಾಷೆ ಮತ್ತು ಭಾಷೆಗಳು ಬಹು ಮುಖ್ಯ ಪಾತ್ರ ವಹಿಸುತ್ತವೆ. ಅದರಲ್ಲೂ ಪರಿಭಾಷೆಗಳು ಇನ್ನೂ ಹೆಚ್ಚಿನ ಮಹತ್ವವನ್ನು ಹೊಂದಿವೆ. ಏಕೆಂದರೆ ಇವು ಸಿದ್ಧಾಂತಕ್ಕೆ ಜೀವ ತುಂಬುತ್ತವೆ. ಆದುದರಿಂದ ಪರಿಭಾಷೆಗಳನ್ನು ಅರ್ಥಮಾಡಿಕೊಂಡು ಬಳಸಲು ಕಲಿಯುವುದು ಜ್ಞಾನದ ಗಳಿಕೆಗೆ ಹಾಗೂ ಸೃಷ್ಟಿಗೆ ಅನಿವಾರ್ಯ. ಈ ನಿಟ್ಟಿನಲ್ಲಿ ಈ ಪುಸ್ತಕವು ಬಹಳ ಅತ್ಯಮೂಲ್ಯವಾದದ್ದು ಎಂದರೆ ತಪ್ಪಾಗಲಾರದು. ಇಂದಿನ ಸಮಾಜ ವಿಜ್ಞಾನದ ಓದು ಮತ್ತು ಬೋಧನೆಯಲ್ಲಿ ಪರಿಭಾಷೆಗಳನ್ನು ರೂಪಿಸಿಕೊಂಡು ಬಳಸುವುದರ ಮೇಲೆ ಪ್ರತ್ಯೇಕವಾಗಿ ಗಮನ ಹರಿಸುವ ಪರಿಪಾಠ ಕಡಿಮೆ. ಇದು ಜ್ಞಾನ ಸಂಪಾದನೆಗೆ ಬಹುದೊಡ್ಡ ತೊಡಕಾಗಿದೆ. ಈ ತೊಡಕನ್ನು ನಿವಾರಿಸಲು ಈ ಪುಸ್ತಕವು ನೆರವಾಗಲು ಯತ್ನಿಸುತ್ತದೆ. ಈ ಪುಸ್ತಕದಲ್ಲಿ ಈ ಕೆಳಕಂಡ ಪರಿಕಲ್ಪನೆಗಳನ್ನು ವಿವರಿಸಲಾಗಿದೆ.
ಹತ್ತಿರವಿದ್ದರೂ ದೂರ ನಿಲ್ಲುವೆವು,
ನಮ್ಮ ಅಹಮ್ಮಿನ ಕೋಟೆಯಲಿ, ಎಷ್ಟು ಕಷ್ಟವೋ ಹೊಂದಿಕೆಯೆಂಬುದು ನಾಲ್ಕು ದಿನದ ಈ ಬದುಕಿನಲ್ಲಿ - ಜಿ.ಎಸ್. ಶಿವರುದ್ರಪ್ಪ ದೂರವಿದ್ದರೂ ಮುಖ ನೋಡದೆ, ಭೇಟಿಯಾಗದೆ, ನನ್ನನ್ನು ಅವರ ಮಗನಂತೆ ಕಂಡು ಮಾರ್ಗದರ್ಶನ ಮಾಡಿದ ಟಿ.ಕೆ. ನೈಯ್ಯರ್ ರವರ ವ್ಯಕ್ತಿತ್ವಕ್ಕೆ ನಾನು ಮಾರು ಹೋದೆ. ಬೆಳಿಗ್ಗೆಯಿಂದ ರಾತ್ರಿವರೆಗಿನ ಜೊತೆಯಲ್ಲಿರುತ್ತೇವೆ, ಕಾಫಿ ಕುಡಿಯುತ್ತೇವೆ, ಜೊತೆಯಲ್ಲಿ ಊಟ ಮಾಡುತ್ತೇವೆ ಆದರೆ ದೂರ ನಿಲ್ಲುತ್ತೇವೆ, ಮನಸ್ಸಿನಲ್ಲಿ ಮೆಚ್ಚುಗೆಯ ಮಮಕಾರವಿರುವುದಿಲ್ಲ. ನಾವು ಬದುಕಿ ಮಣ್ಣಾಗುವ ಈ ನಾಲ್ಕಾರು ವರ್ಷಗಳ ಜೀವನದಲ್ಲಿ ಯಾವುದು ಮುಖ್ಯ? ಇದಲ್ಲ, ಇದಲ್ಲ ಎಂದು ಹಣ, ಆಸ್ತಿ-ಪಾಸ್ತಿಗಳನ್ನು ಅಂತಸ್ತು ಅಧಿಕಾರಗಳನ್ನು ಹೊಡೆದು ಪಟ್ಟಿಯಿಂದ ತೆಗೆದು ಬಿಡಬಹುದು. ಹಾಗಾದರೆ ಕಡೆಯಲ್ಲಿ ಉಳಿಯುವುದಾದರೂ ಯಾವುದು? ಈ ಹುಡುಗಿ ಹೇಳಿದಳು `ಮನುಷ್ಯ ಸಂಬಂಧಗಳು' ಈಕೆ ಹೀಗೆ ಹೇಳಲು ಕಾರಣವಿತ್ತು. ಮೂವತ್ತು ವರ್ಷಗಳ ಹಿಂದೆ ತನ್ನ ಹೆತ್ತವರ ಹೆಸರನ್ನೂ ಸಹ ನೆನಪಿಟ್ಟುಕೊಳ್ಳಲಾರದಷ್ಟು ಚಿಕ್ಕವಳಾಗಿದ್ದಾಗ ನಿಂತಿದ್ದ ರೈಲನ್ನು ಹತ್ತಿದಳು. ರೈಲು ಹೊರಟೇ ಬಿಟ್ಟಿತು. ದೂರದ ಊರು ಸೇರಿತು. ಆನಂತರ ಅನಾಥಾಶ್ರಮಗಳ ವಾಸ, ಬುದ್ದಿ ತಿಳಿದಾಗ ಮನುಷ್ಯ ಸಂಬಂಧಗಳ ಹುಡುಕಾಟ. ಹೀಗೆ ಬದುಕು ಸಾಗಿತು. ತನ್ನ ಜೊತೆ ಬೆಳೆದ ಸ್ನೇಹಿತರು ಅಕಸ್ಮಾತ್ತಾಗಿ ಸಿಕ್ಕಿದರಂತೂ ಈಕೆಯ ಮನಸ್ಸಿನಲ್ಲಿ ಭಾವದ ಹೊಳೆಯೇ ಹರಿದುಬಿಡುತ್ತಿತ್ತು. ಹಳೆಯ ದುಗುಡ ದುಮ್ಮಾನಗಳ ನಡುವೆ ಒಂದೋ ಎರಡೋ ಮಧುರ ನೆನಪುಗಳಿಗೆ ಸಾಕ್ಷಿಯಾಗಿ ಎದುರಾಗುತ್ತಿದ್ದರು ಈ ಸ್ನೇಹಿತರು. ಒಟ್ಟಿನಲ್ಲಿ ಒಬ್ಬರು ಮತ್ತೊಬ್ಬರಿಗೆ ಆಸರೆಯಾಗಿ ನಿಂತದ್ದು ಅಥವಾ ಸಂತೋಷದಲ್ಲಿ ಭಾಗಿಯಾಗಿದ್ದು - ಈ ನೆನಪುಗಳನ್ನು ಬಿಟ್ಟರೆ ಇನ್ನೇನು ತಾನೆ ಉಳಿದೀತು? ಇದೇ ಮುಖ್ಯವಲ್ಲ ಎಂದು ಹೊಡೆದುಹಾಕಲು ಸಾಧ್ಯವೇ? ಹಾಗಾಗಿ ಅವಳು ಸರಿಯಾಗಿಯೇ ಗುರುತಿಸಿದ್ದಳು `ಬದುಕಿನಲ್ಲಿ ಬಹು ಮುಖ್ಯವಾದದ್ದು ಸಂಬಂಧಗಳು.'
ಲಿಂಕನ್ನ ಹೆಸರನ್ನು ನೀವು ಕೇಳಿರಬೇಕು, ಕೆಲಸವನ್ನು ಕಳೆದುಕೊಂಡ, ವಿಧಾನ ಸಭೆಯ ಚುನಾವಣೆಯಲ್ಲಿ ಸೋತ, ವ್ಯಾಪಾರಪ್ರಾರಂಭಿಸಿ ಅದರಲ್ಲಿ ನಷ್ಟ ಹೊಂದಿದ, ಪತ್ನಿ ಖಾಯಿಲೆ ಬಿದ್ದು ಸತ್ತಳು, ನರಗಳ ದೌರ್ಬಲ್ಯವನ್ನು ಅನುಭವಿಸಿದ, ಸ್ಪೀಕರ್ ಹುದ್ದೆಯಚುನಾವಣೆಗೆ ನಿಂತು ಸೋತ, ಒಂದು ರಾಜಕೀಯ ಪಕ್ಷದ ಮೂಲಕ ಚುನಾವಣೆಗೆ ಸ್ಪರ್ಧಿಸಿ ಸೋತ, ಲ್ಯಾಂಡ್ ಆಫಿಸರ್ ಹುದ್ದೆಗೆ ಅರ್ಜಿಸಲ್ಲಿಸಿ ಸೋತ, `ಸೆನೆಟ್' ಶಾಸನ ಸಭೆಗೆ ಚುನಾವಣೆಯಲ್ಲಿ ಸೋತ, `ಉಪರಾಷ್ಟ್ರಪತಿ' ಪದವಿಗೆ ಸ್ಪರ್ಧಿಸಿ ಸೋತ, ಮತ್ತೆ `ಸೆನೆಟ್'ಗೆಸ್ಪರ್ಧಿಸಿ ಸೋತ.
`ಚಿನ್ಮಯ' ಕೃಷ್ಣಶಾಸ್ತ್ರಿಗಳ ಅಭಿಮಾನಿಗಳು ಅವರಿಗೆ 1979 ರಲ್ಲಿ ಅರ್ಪಿಸಿದ ಸಂಭಾವನಾಗ್ರಂಥ. ಪ್ರೊ.ಎಂ.ವಿ. ಶ್ರೀನಿವಾಸ್ ಮತ್ತು ಡಾ.ಕೃಷ್ಣಮೂರ್ತಿ ಹಾನೂರು ಈ ಗ್ರಂಥದ ಸಂಪಾದಕರು. ಪುಸ್ತಕವನ್ನು ಕುರಿತ ಪತ್ರಿಕೆಗಳು ತಮ್ಮ ಪ್ರಶಂಸೆಯನ್ನು ವ್ಯಕ್ತಪಡಿಸಿವೆ.ಡಾ.ಹಾಮಾನಾಯಕರು `ಕಾಡು ಬೆಳದಿಂಗಳು' ಎಂಬ ಸೊಗಸಾದ ಲೇಖನವನ್ನು ಬರೆದು ಬೆಳಗೆರೆ ಕೃಷ್ಣಶಾಸ್ತ್ರಿಗಳ ಸೇವೆಯನ್ನುಶ್ಲಾಘಿಸಿದ್ದಾರೆ.
ಬೆಳಗೆರೆ ಕೃಷ್ಣಶಾಸ್ತ್ರಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮದಲ್ಲಿ 1916ರಲ್ಲಿ ಜನಿಸಿದರು, ಅವರ ತಂದೆ ಚಂದ್ರಶೇಖರ ಶಾಸ್ತ್ರಿಗಳು ಪ್ರಸಿದ್ದ ಆಶುಕವಿಗಳು, ದಾರ್ಶನಿಕರೂ ಆಗಿದ್ದರು, ಅವರ ಸರಳತೆ, ಸಾಹಿತ್ಯಾಸಕ್ತಿ ಮುಗ್ಧ ಮನೋಭಾವ ಹೊಂದಲು ಅವಕಾಶಮಾಡಿಕೊಟ್ಟಿದ್ದಿತು. ಕೃಷ್ಣಶಾಸ್ತ್ರಿಗಳ ತಾತ ಅಪ್ಪಣ್ಣ ಭಟ್ಟರು ಪ್ರಸಿದ್ಧ ಸಂಸ್ಕೃತ ವಿದ್ವಾಂಸರಾಗಿ ವಿದ್ವತ್ ಸಭೆಗಳಲ್ಲಿ ಸನ್ಮಾನವನ್ನು ಗಳಿಸಿಕೊಂಡಿದ್ದರು. ಸಮಾಜಕಾರ್ಯ ಶಿಕ್ಷಣವು ಒಂದು ಪ್ರತ್ಯೇಕ ವೃತ್ತಿಪರ ಶಿಕ್ಷಣವಾಗಿ ಗುರುತಿಸಿಕೊಂಡಿದ್ದರೂ ಇಂದಿಗೂ ಸರಿಯಾದ ಮಾನ್ಯತೆ ಸಿಗದೇ ಇರುವುದು ವಿಪರ್ಯಾಸವೇ ಸರಿ. ಇದಕ್ಕೆ ಮೂಲಕಾರಣ ಸಮಾಜಕಾರ್ಯ ಶಿಕ್ಷಣದಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ವಿಧಾನಗಳಿದ್ದಾಗಿಯೂ ಅವುಗಳ ಕ್ಷೇತ್ರಕಾರ್ಯದಲ್ಲಿನ ಆಚರಣೆಯಲ್ಲಿ ವಿಫಲತೆಗೊಂಡಿರುವುದು ಹಾಗೂ ಆಚರಣೆಯಲ್ಲಿ ದೇಶೀಕರಣಕ್ಕೆ ಬದಲಾಗಿ ಪಾಶ್ಚಾತ್ಯ ಪರಿಕಲ್ಪನೆಯನ್ನು ಆಧಾರವಾಗಿರಿಸಿಕೊಂಡಿರುವುದೇ ಆಗಿದೆ. ಆದ್ದರಿಂದ ನನ್ನ ವಾದ ಖಂಡಿತವಾಗಿಯೂ ಪ್ರಸ್ತುತ ಸಮಾಜಕಾರ್ಯ ಕ್ಷೇತ್ರಕಾರ್ಯದಲ್ಲಿ ಬದಲಾವಣೆ ಅನಿವಾರ್ಯ ಹಾಗೂ ಆವಶ್ಯವೆನಿಸುತ್ತದೆ.
ಕನ್ನಡದಲ್ಲಿ ಸಮಾಜಕಾರ್ಯ ಸಾಹಿತ್ಯ ಎಂದ ಕೂಡಲೇ ನೆನಪಾಗುವುದು ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರು. `ಸಮಾಜಕಾರ್ಯ' ಎಂಬ ಪದವನ್ನು ಟಂಕಿಸಿ ಪ್ರಯೋಗಕ್ಕೆ ತಂದು ಅದು ಜನಸಾಮಾನ್ಯರ ಆಡು ಭಾಷೆಗೆ ಬರುವಂತೆ ಮಾಡಿದವರು ಪ್ರೊ.ಎಚ್.ಎಂ.ಎಂ. ಇಂದು ಸಮಾಜಕಾರ್ಯ ಕ್ಷೇತ್ರದಲ್ಲಿರುವ ಸಾವಿರಾರು ಕ್ರಿಯಾಶೀಲರ ಪ್ರೀತಿಯ ಮೇಷ್ಟ್ರು ನಮ್ಮ ಎಚ್.ಎಂ.ಮರುಳಸಿದ್ಧಯ್ಯನವರು. ಈ ಮೇಷ್ಟ್ರು ಬರಿದೆ ಪಾಠ ಮಾಡಲಿಲ್ಲ, ವಿದ್ಯಾರ್ಥಿಗಳನ್ನು ಕ್ಷೇತ್ರ ಕಾರ್ಯಕ್ಕೆ ಒಡ್ಡಿದರು, ವಿದ್ಯಾರ್ಥಿಗಳೊಡನೆ ತಾವೂ ಕ್ಷೇತ್ರ ಕಾರ್ಯದಲ್ಲಿ ಸುತ್ತಾಡಿದರು, ಚಿಂತಕರೊಡನೆ ಕುಳಿತು ಚರ್ಚೆ ಮಾಡಿದರು, ಸಮುದಾಯಗಳೊಡನೆ ಸಂವಾದ ಮಾಡಿದರು ಅಷ್ಟೇ ಅಲ್ಲ ಇವೆಲ್ಲವನ್ನೂ ಅರ್ಥವಾಗುವ ರೀತಿಯಲ್ಲಿ ಸೊಗಸಾದ ಶೈಲಿಯಲ್ಲಿ ದಾಖಲಿಸಿದರು. ಹೀಗಾಗಿ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಮತ್ತು ಸಮಾಜಕಾರ್ಯದ ಕ್ಷೇತ್ರದಲ್ಲಿರುವವರಿಗೆ ಪ್ರೊ.ಎಚ್.ಎಂ.ಮರುಳಸಿದ್ಧಯ್ಯನವರ ಕೃತಿಗಳು ಕೈದೀವಟಿಗೆಗಳಾಗಿವೆ.
ಗತೀಕರಣ, ನಗರೀಕರಣಗಳು ವ್ಯಕ್ತಿ-ಪ್ರತಿಷ್ಟೆ ಸಮಾಜವನ್ನು ಅಲ್ಲೋಲಕಲ್ಲೋಲ ಮಾಡುತ್ತಿವೆ. `ಅಭಿವೃದ್ಧಿಯ' ಬೆನ್ನಹತ್ತಿರುವ ಮನುಷ್ಯನಿಗೆ ಬೇರೇನೂ ಕಾಣದಾಗಿದೆ. ಇನ್ನು ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಅವ್ಯವಸ್ಥೆಗಳಿಗಂತೂ ಲೆಕ್ಕವೇ ಇಲ್ಲ. ಈ ಅಭಿವೃದ್ಧಿಯ ಪ್ರತಿಫಲಗಳು ಜನರಿಗೆ ಎಷ್ಟು, ಹೇಗೆ ತಲುಪುತ್ತಿವೆಯೋ ಗೊತ್ತಿಲ್ಲ. ಆದರೆ, ಪರಿಸರದ ಮೇಲೆ ಅತ್ಯಾಚಾರವೆಸಗುತ್ತಿರುವುದಂತೂ ನಿಜ. `ಅಭಿವೃದ್ಧಿ'ಯೆಂಬ ಮಾಯೆಯಿಂದ ಹೊರಸೂಸುವ ಮಾಲಿನ್ಯದಿಂದ ಇಂದು ಜೀವಿಗಳು ಜೀವಿಸಲೂ ಕೂಡ ತತ್ಪಾರವೇರ್ಪಟ್ಟಿದೆ.
ಆದಿನ ಬೆಳಗ್ಗೆ ಏಳುವಾಗಲೇ ಅನ್ನಿಸಿತು, ಇವತ್ತು ಏನೋ ವಿಶೇಷವಿರುತ್ತದೆ ಎಂದು. ರೇಡಿಯೋದಲ್ಲಿ 'ಮಹಿಳೆಯರ ಪಾತ್ರ' ಎಂದು ಸಮಾಜಸೇವಕಿಯ ಮಾತು ನಡೆಯುತ್ತಿತ್ತು. ಜಯಳಿಗೆ ಆ ದಿನ ಎನೋ ಒಂದು ತರಹದ ಭಾವನೆಗಳು. ರೇಡಿಯೋದಲ್ಲಿ ಹೇಳುವುದನ್ನು ಕೇಳುವಾಗ ಹೌದು, ಹೀಗೇ ಮಾಡಬೇಕು ಅನ್ನಿಸಿತು. ಮಹಿಳೆಯ ಸ್ಥಾನದ ಬಗ್ಗೆ ಜಾಗೃತಿ ರಿಸರ್ವೇಶನ್ ಬಗ್ಗೆ ವಿವಾದಗಳು ಎಲ್ಲ ಕೇಳಿದ ಮಾತುಗಳೇ ಯಾವುದೂ ಹೊಸದಲ್ಲ.
ಅವಳಿಗೆ ಅತ್ತೆಯ ಮಾತು ಜ್ಞಾಪಕಕ್ಕೆ ಬಂತು, ಇಂತದೆಲ್ಲ ಕೇಳಲು ಚಂದ, ಹೇಳಲೂ ಚಂದ. ಆದರೆ ಕಾರ್ಯರೂಪಕ್ಕೆ ತರಲು ಇನ್ನೂ ಎಷ್ಟು ಶತಮಾನವೋ? ಬದಲಾವಣೆ ಜಗದ ನಿಯಮ, ಸೂಕ್ತವಾದ ಸಮಯದದಲ್ಲಿ ಎಲ್ಲವೂ ಮಾರ್ಪಾಡಾಗಬೇಕಾಗುತ್ತದೆ. ವ್ಯವಸ್ಥೆಯೂ ಇದಕ್ಕೆ ಹೊರತಲ್ಲ. ಇತ್ತೀಚೆಗೆ ಹಲವು ನಿರಾಶ್ರಿತರ ಸಾವಿನೊಂದಿಗೆ ಸುದ್ದಿಯಲ್ಲಿದ್ದ ನಿರಾಶ್ರಿತರ ಪರಿಹಾರ ಕೇಂದ್ರದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ನಿರಾಶ್ರಿತರಿಗೆ ಆರೋಗ್ಯಪೂರ್ಣ ಉತ್ತಮ ಪರಿಸರ ನಿರ್ಮಾಣವಾಗುತ್ತಿದೆ.
ಬದಲಾವಣೆಯ ಗತಿಯನ್ನು ಹೆಚ್ಚಿಸಲು ಸಮಾಜಕಾರ್ಯ ಪ್ರಶಿಕ್ಷಣಾರ್ಥಿಗಳ ದಂಡೇ ಸಿದ್ಧವಾಗುತ್ತಿದೆ. ಬೆಂಗಳೂರು ವಿಶ್ವವಿದ್ಯಾಲಯ ಮತ್ತು 13 ಅನುಮೋದಿತ ಸಮಾಜಕಾರ್ಯ ಶಾಲೆಗಳಿಂದ 35 ಜನ ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ. ಆದರೆ ಇವರಿಗೆ ಸೂಕ್ತ ಮಾರ್ಗದರ್ಶನ, ತಿಳಿವಳಿಕೆ ನೀಡಬೇಕಾದದ್ದು ಅತ್ಯಗತ್ಯ. ಬಹಳಷ್ಟು ವಿದ್ಯಾರ್ಥಿಗಳು ಈಗತಾನೆ ಸಮಾಜಕಾರ್ಯ ಹೊಸ್ತಿಲನ್ನು ಪ್ರವೇಶಿಸುತ್ತಿರುವುದರಿಂದ ಇದು ಅನಿವಾರ್ಯವು ಕೂಡ. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಯಾವುದೇ ಒಂದು ಕಾಯಿದೆ/ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿ ಮಾಡುವುದು ಸುಲಭದ ಕೆಲಸವಲ್ಲ. ಸಂಪನ್ಮೂಲ, ನುರಿತ ತಜ್ಞರು ಮತ್ತು ತಾಂತ್ರಿಕತೆಯ ಲಭ್ಯತೆ ಎಷ್ಟೇ ಇದ್ದರೂ ಕೂಡ ಸಂಬಂಧಿಸಿದ ಯೋಜನೆಯ ಬಗ್ಗೆ ಶ್ರೀಸಾಮಾನ್ಯರಲ್ಲಿ ಅರಿವಿಲ್ಲದಿದ್ದಲ್ಲಿ ನಿಗದಿತ ಯೋಜನೆ ಯಶಸ್ವಿಯಾಗಲಾರದು. ಒಂದು ವೇಳೆ ಈ ಮೇಲಿನ ಅಂಶಗಳಿಂದ ಅಭಿವೃದ್ಧಿ ಸಾಧ್ಯವಾಗಿದ್ದರೆ ಅಥವಾ ದೇಶದ ಸ್ಥಿತಿಗತಿಗಳು ಬದಲಾಗುವಂತಿದ್ದರೆ "Incredible India" ಎಂಬ ಘೋಷಣೆಯನ್ನು ಇಂದು ನಾವು ಕೇವಲ ಜಾಹಿರಾತುಗಳಲ್ಲಿ ನೋಡುವಂತಹ ಸ್ಥಿತಿ ಬರುತ್ತಿರಲಿಲ್ಲ. ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಭಾರತ ಒಪ್ಪಿ ಸಹಿ ಮಾಡಿ ಸುಮಾರು 18 ವರ್ಷಗಳೇ ಸಂದಿವೆ. ಆದರೆ ಭಾರತದಲ್ಲಿರುವ ಮಕ್ಕಳ ಸ್ಥಿತಿಗತಿಗಳು ಹೇಳಿಕೊಳ್ಳುವಂತಹ ಸುಧಾರಣೆಯೇನನ್ನು ಕಂಡಿಲ್ಲ. ಬಾಲ್ಯವಿವಾಹ, ಬಾಲಕಾರ್ಮಿಕ ಪದ್ಧತಿ, ಮಕ್ಕಳ ಶೋಷಣೆ ಮತ್ತು ಸಾಗಾಣಿಕೆಯ ನಿರ್ಮೂಲನೆಗಾಗಿ ಜಾರಿಗೆ ಬಂದ ಕಾನೂನುಗಳು ಕಡತಗಳಿಗೆ ಸೀಮಿತವಾಗಿವೆಯೇ ವಿನಃ ಪರಿಣಾಮಕಾರಿಯಾಗಿ ಜಾರಿಗೆ ಬರುತ್ತಿಲ್ಲ. ಅಸ್ತಿತ್ವದಲ್ಲಿರುವ ಕಾನೂನು ಮತ್ತು ಯೋಜನೆಗಳು ನೇರವಾಗಿ ನಿರ್ದಿಷ್ಟ ಪದ್ಧತಿಯನ್ನು ತೊಲಗಿಸುವ ಉದ್ದೇಶದಿಂದ ಜಾರಿಗೆ ಬಂದರೂ ಅವುಗಳ ತೀಕ್ಷ್ಣತೆ ಕೇವಲ ಕಡತಗಳಲ್ಲಿ ಕೇಳಿಬರುತ್ತಿದೆಯೇ ಹೊರತು ಆಚರಣೆಯಲ್ಲಿ ಅಲ್ಲ. ಕಾನೂನುಗಳು ಯಾವುದೇ ಪದ್ಧತಿಯನ್ನು ಖಂಡಿಸುವುದಕ್ಕಿಂತ ಅದರ ನಿರ್ಮೂಲನೆಗಾಗಿ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಲ್ಲಿ ಕಾನೂನಿನ ಉದ್ದೇಶ ಈಡೇರುವುದರ ಜೊತೆಗೆ ಸಮಾಜದಲ್ಲಿ ಬೇರುಬಿಟ್ಟಿರುವ ದುಷ್ಟ ಪದ್ಧತಿಗಳನ್ನು ಕಿತ್ತೊಗೆಯಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ "ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ 2009 ಮತ್ತು ಭಾಗ್ಯಲಕ್ಷ್ಮಿ ಯೋಜನೆ"ಗಳು ಬಹಳ ಸೂಕ್ತವಾಗಿವೆ ಎನ್ನುವುದರಲ್ಲಿ ಎರಡು ಮಾತಿಲ್ಲ. 6-14 ವಯೋಮಾನದ ಪ್ರತಿಯೊಂದು ಮಗುವಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ನೀಡುವ ಮುಖ್ಯ ಗುರಿಯನ್ನು ಹೊಂದಿರುವ ಈ ಕಾಯಿದೆಯ ಜೊತೆಗೆ ಬಾಲಕಾರ್ಮಿಕ, ಬಾಲ್ಯವಿವಾಹ, ಮಕ್ಕಳ ಸಾಗಾಣಿಕೆ ಮತ್ತು ದೌರ್ಜನ್ಯಗಳನ್ನು ತಡೆಯುವಂತಹ ಮಹದೋದ್ದೇಶವನ್ನೂ ಹೊಂದಿದೆ ಎಂದರೆ ಅತಿಶಯೋಕ್ತಿಯಾಗಲಾರದು. ಕಾರಣ 6-14 ವಯೋಮಾನದ ಎಲ್ಲಾ ಮಕ್ಕಳು ಶಾಲೆಯಲ್ಲಿದ್ದರೆ ಮಕ್ಕಳ ಹಕ್ಕುಗಳ ಉಲ್ಲಂಘನೆ ಮತ್ತು ಮಕ್ಕಳ ಮೇಲಾಗುವಂತಹ ದೌರ್ಜನ್ಯಗಳು ಮುಂದುವರೆಯಲು ಸಾಧ್ಯವಿಲ್ಲ.
ಈ ಕಥೆಯು 100 ವರ್ಷಗಳಿಗಿಂತಲೂ ಹಳೆಯದಾಗಿರಬಹುದು. ಆದರೆ ಪ್ರಸ್ತುತ ದಿನಗಳಿಗೂ ಅನ್ವಯವಾಗುವ ವಾಸ್ತವದ ಚಿತ್ರಣ.
1892ರ ಇಸವಿ ಸ್ಟಾನ್ಫೋರ್ಡ್ ವಿಶ್ವವಿದ್ಯಾಲಯದ 18 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜಿನ ಶುಲ್ಕವನ್ನು ಕಟ್ಟಲು ಪರದಾಡುತ್ತಿದ್ದ. ಆತನೊಬ್ಬ ಅನಾಥನಾಗಿದ್ದು ಈ ಹಣವನ್ನು ಹೇಗೆ ಹೊಂದಿಸುವುದು ಎಂಬುದೂ ಸಹ ಅವನಿಗೆ ಗೊತ್ತಿರಲಿಲ್ಲ. ಹೀಗೆ ಯೋಚನೆಯಲ್ಲಿರುವಾಗ ತಕ್ಷಣ ಆತನಿಗೆ ಒಂದು ಉಪಾಯ ಹೊಳೆಯಿತು. ತನ್ನ ಸ್ನೇಹಿತನೊಡಗೂಡಿ ಕಾಲೇಜಿನಲ್ಲಿ ಒಂದು ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿ ಅದರಿಂದ ಬರುವ ಹಣವನ್ನು ತನ್ನ ವಿದ್ಯಾಭ್ಯಾಸಕ್ಕೆ ಬಳಸಿಕೊಳ್ಳಲು ತೀರ್ಮಾನಿಸಿದನು. ಈ ಯೋಜನೆಯನ್ನು ಕಾರ್ಯರೂಪಗೊಳಿಸಲು ಅಂದಿನ ಪ್ರಸಿದ್ಧ ಪಿಯಾನೋ ವಾದಕರಾಗಿ ಹೆಸರು ಮಾಡಿದ್ದ ಇಗ್ನೇಸಿ.ಜೆ.ಪೆಡೆರ್ವಸ್ಕಿ ಎಂಬುವರನ್ನು ಭೇಟಿ ಮಾಡಿ ತಮ್ಮ ಯೋಜನೆಗಳನ್ನು ತಿಳಿಸಿದರು. ಪೆಡೆರ್ವಸ್ಕಿಯ ವ್ಯವಸ್ಥಾಪಕರು ಹಣದ ಮೊತ್ತವನ್ನು ಗೊತ್ತುಪಡಿಸಿದರು. ಆ ಮೊತ್ತವು 2000 ಅಮೇರಿಕನ್ ಡಾಲರ್ಗಳಾಗಿತ್ತು. ಈ ಶರತ್ತಿಗೆ ಒಪ್ಪಿದ ಯುವಕರು ಕಾರ್ಯಕ್ರಮವನ್ನು ಆಯೋಜಿಸಿಯೇ ಬಿಟ್ಟರು. ಭಾರತೀಯ ನಂಬಿಕೆ ಹಾಗೂ ಸಂಸ್ಕೃತಿಯಲ್ಲಿ ಜನರು ವಿವಿಧ ರಿತೀಯ ಶಕ್ತಿಗಳಿಂದ ಸ್ವಾಧೀನ/ ಸ್ವಾಮ್ಯಕ್ಕೊಳಪಡುವುದನ್ನು ನಾವೆಲ್ಲ ಕೇಳಿದ್ದೇವೆ. ಹಲವಾರು ಬಾರಿ ನೋಡಿರುತ್ತೇವೆ. ಸ್ವಾಧೀನ(ದೈವಾವೇಶ)ದಲ್ಲಿರುವವರು, ತಾವು ಬೇರೆ ಶಕ್ತಿ\ಆತ್ಮದ ವಶದಲ್ಲಿರುವಂತೆ ಬೇರೆ ರೀತಿಯ ಆವಭಾವ, ಮಾತು, ವರ್ತನೆಯನ್ನು ತೋರಿಸುತ್ತಾರೆ. ಅವರ ವರ್ತನೆಯು ಅವರ ನೈಜ ವರ್ತನೆಗಿಂತ ಭಿನ್ನವಾಗಿರುತ್ತದೆ. ನನಗೆ ಈ ರೀತಿಯ ವರ್ತನೆಯ ಪರಿಚಯವಾಗಿದ್ದು ಮೂವತ್ತು ವರ್ಷಗಳ ಹಿಂದೆ ನಮ್ಮ ನಾಡಿನ ಪ್ರತಿಷ್ಠಿತ ಮಾನಸಿಕ ಆರೋಗ್ಯ ಸಂಸ್ಥೆಯಾದ `ನಿಮ್ಹಾನ್ಸ್', ಬೆಂಗಳೂರಿನಲ್ಲಿ, ಮನೋವೈದ್ಯಕೀಯ ಸಮಜಕಾಯ ವಿಷಯದಲ್ಲಿ ಸ್ನಾತಕೋತ್ತರ ಡಿಪ್ಲೊಮ ಪದವಿ ಮಾಡುತ್ತಿದ್ದಾಗ. ಆ ಸಮಯದಲ್ಲಿ ಕೆಲವು ರೋಗಿಗಳು ಜೋರಾಗಿ ಬೈದಾಡುತ್ತ, ಕೂಗಾಡುತ್ತಿದ್ದರು. ಅವರನ್ನು ಮೈಮೇಲೆ ದೆವ್ವ/ಗಾಳಿ ಬಂದಿದೆಯೆಂದು ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆತರಲಾಗಿದೆ ಎಂದು ಉತ್ತರ ಬರತ್ತಿತ್ತು. ಈ ವಿಷಯ ಕೇಳಿ ನನಗೆ ಆಶ್ಚರ್ಯವಾಗಿತ್ತು.
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|