ವಿಶ್ವ ಸಂಸ್ಥೆಯ ಮಾಜಿ ಅಧ್ಯಕ್ಷ ಕೋಫಿ ಅನ್ನಾನ್ 21ನೇ ಶತಮಾನವನ್ನು ಎನ್ಜಿಒಗಳ ಯುಗ ಎಂದು ಬಣ್ಣಿಸಿದ್ದಾರೆ.
ಎನ್ಜಿಒ ಎಂದರೆ ಸರ್ಕಾರೇತರ ಸಂಸ್ಥೆ. ವಿಶ್ವಬ್ಯಾಂಕ್ ಪ್ರಕಾರ ಎನ್ಜಿಒಗಳು ಖಾಸಗಿ ಸಂಸ್ಥೆಗಳು. ಸಂಕಷ್ಟದಲ್ಲಿರುವವರಿಗೆ ಪರಿಹಾರ ದೊರಕಿಸುವ ಚಟುವಟಿಕೆಯಲ್ಲಿ ತೊಡಗಿರುತ್ತವೆ. ಅಲ್ಲದೆ, ಬಡವರ ಹಿತರಕ್ಷಣೆ, ಪರಿಸರ ಕಾಳಜಿ, ಪ್ರಾಥಮಿಕ ಸಾಮಾಜಿಕ ಸೇವೆಗಳನ್ನು ಒದಗಿಸುವುದು, ಇಲ್ಲವೆ ಸಮುದಾಯದ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳುವುದು. ವಾಸ್ತವವಾಗಿ, ಎನ್ಜಿಒಗಳು ಕಾನೂನು ಬದ್ಧವಾಗಿ ಸ್ಥಾಪಿತಗೊಂಡ ಸಂಸ್ಥೆಗಳು. ಸರ್ಕಾರದಿಂದ ಪ್ರತ್ಯೇಕಗೊಂಡು ಸ್ವತಂತ್ರವಾಗಿ ಕಾರ್ಯನಿರ್ವಹಿಸುವುವು ಮತ್ತು ಸರಳ ಅರ್ಥದಲ್ಲಿ ಹೇಳುವುದಾದರೆ ಸರ್ಕಾರೇತರ, ಲಾಭರಹಿತ, ಬದ್ಧತೆ ಇರುವ ಸಮೂಹ. ಸಾರ್ವಜನಿಕರ ಹಿತರಕ್ಷಣೆಯೇ ಈ ಸಮೂಹಗಳ ಉದ್ದೇಶ. ಮಾನವ ಹಕ್ಕುಗಳು, ಅಭಿವೃದ್ಧಿ ಹಾಗೂ ಸಾಮಾಜಿಕ ನ್ಯಾಯವನ್ನು ಒದಗಿಸಿಕೊಡುವುದೇ ಇವುಗಳ ಮೂಲ ಉದ್ದೇಶವಾಗಿದೆ. ಸಾಮಾನ್ಯವಾಗಿ ಎನ್ಜಿಒಗಳು ಸರ್ಕಾರದಿಂದ ಪೂರ್ಣ ಪ್ರಮಾಣದಲ್ಲಿ ಅನುದಾನ ಪಡೆದುಕೊಳ್ಳುತ್ತವೆ. ಕೆಲವು ಸಂದರ್ಭಗಳಲ್ಲಿ ಭಾಗಶಃ ದೇಣಿಗೆಯನ್ನು ಪಡೆಯುತ್ತವೆ. ಸರ್ಕಾರೇತರ ಸಂಸ್ಥೆ ಎನ್ನಿಸಿಕೊಳ್ಳಲು ಸರ್ಕಾರಿ ಪ್ರತಿನಿಧಿಗಳನ್ನು ತನ್ನ ಸಂಸ್ಥೆಯ ಪ್ರತಿನಿಧಿತ್ವದಿಂದ ಅಥವಾ ಸದಸ್ಯತ್ವದಿಂದ ಹೊರಗಿರಿಸುತ್ತದೆ. ಹಾಗೆಯೇ ಎನ್ಜಿಒಗಳು ಎಂದಾಗ ಅವುಗಳು ಯಾವುದೇ ರಾಷ್ಟ್ರ ಇಲ್ಲವೇ ಅಂತಾರಾಷ್ಟ್ರೀಯ ಕಾನೂನುಗಳಿಗೆ ಅನುಗುಣವಾಗಿ ಕಾನೂನು ಪರಿಹಾರ ದೊರಕಿಸಿಕೊಡುವ ಸಂಸ್ಥೆಗಳಲ್ಲ ಎನ್ನುವುದು ಗಮನದಲ್ಲಿರಬೇಕು. ವಿಶ್ವ ಬ್ಯಾಂಕ್ ಪ್ರಧಾನವಾಗಿ ಎರಡು ರೀತಿಯಲ್ಲಿ ಎನ್ಜಿಒಗಳನ್ನು ಗುರುತಿಸಿದೆ. ಕಾರ್ಯಾತ್ಮಕ ಎನ್ಜಿಒಗಳು, ಸಲಹಾತ್ಮಕ ಎನ್ಜಿಒಗಳೆಂದು ಸ್ಥೂಲವಾಗಿ ಅವುಗಳನ್ನು ವಿಂಗಡಿಸಲಾಗಿದೆ. ಇವೆರಡರ ಪ್ರಮುಖ ಉದ್ದೇಶಗಳು ಅಭಿವೃದ್ಧಿ ಆಧಾರಿತ ಯೋಜನೆಗಳನ್ನು ವಿನ್ಯಾಸಗೊಳಿಸಿ ಅವುಗಳ ಅನುಷ್ಠಾನಗೊಳಿಸುವುದು ಎನ್ಜಿಒಗಳ ಪ್ರಮುಖ ಉದ್ದೇಶವಾಗಿದೆ. ಕಾರ್ಯಾತ್ಮಕ ಎನ್ಜಿಒಗಳನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸಮುದಾಯ ಆಧಾರಿತ ಸಂಘಟನೆಗಳೆಂದು ವರ್ಗೀಕರಿಸಬಹುದು. ಇನ್ನೊಂದೆಡೆ ಸಲಹಾತ್ಮಕ ಎನ್ಜಿಒಗಳನ್ನು ಅಂತರಾಷ್ಟ್ರೀಯ ಸಂಘಟನೆಗಳೆಂದು ವಿಂಗಡಿಸಲಾಗುತ್ತದೆ. ಅವುಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯ ನಿರ್ವಹಿಸುವುದರ ಜೊತೆಗೆ ನೀತಿ ನಿರೂಪಣೆಗಳನ್ನು ರೂಪಿಸುವಲ್ಲಿ ಪ್ರಧಾನ ಪಾತ್ರವಹಿಸುತ್ತವೆ. ಕೃಪೆ : ಯೋಜನಾ, ನವೆಂಬರ್ 2011 ಜೋಮನ್ ಮ್ಯಾಥ್ಯು, ಜೊಬೈ ವರ್ಗೀಸ್ ಕನ್ನಡಕ್ಕೆ : ರಶ್ಮಿ ಎಸ್.
1 Comment
ಮಹಾತ್ಮ ಗಾಂಧೀಜಿಯವರು ಸದಾ ಕಾಲ ನಮಗೆ ಒಬ್ಬ ರಾಜಕೀಯ ನಾಯಕನಾಗಿ, ಸ್ವತಂತ್ರ ಹೋರಾಟಗಾರನಾಗಿ, ಸಾಮಾಜಿಕ ಸುಧಾರಣೆಯ ಪ್ರವರ್ತಕನಾಗಿ ಹಾಗೂ ತತ್ವಜ್ಞಾನಿ ಸರಳ ಜೀವಿಯಾಗಿ ಕಂಡುಬರುತ್ತಾರೆ. ಗಾಂಧೀಜಿ ಒಬ್ಬ ಪರಿಸರವಾದಿಯೂ ಹೌದೇ? ಎಂಬ ಪ್ರಶ್ನೆಗೆ ಬಹಳಷ್ಟು ಬಾರಿ ನಮಗೆ ಸಿಗುವ ಉತ್ತರ ನಕಾರಾತ್ಮಕವಾದ್ದು, ಇದಕ್ಕೆ ಕಾರಣವೆಂದರೆ ಗಾಂಧೀಜಿ ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯೂ ಪರಸರವನ್ನು ಕುರಿತ ವಿಚಾರಗಳನ್ನು ನೇರವಾಗಿ ವ್ಯಕ್ತಪಡಿಸಿಲ್ಲ. ಭಾರತದಲ್ಲಿ ಪರಿಸರ ಚಳುವಳಿಯ ಪ್ರಾರಂಭಕ್ಕೆ ಕಾರಣವಾದ ಕೆಲವು ಮೂಲ ಪರಿಕಲ್ಪನೆಗಳನ್ನು ಗಮನಿಸಿದಾಗ ಅವುಗಳಲ್ಲಿ ಗಾಂಧೀಜಿಯವರ ಚಿಂತನೆಯ ಪ್ರಭಾವವು ಗಾಢವಾಗಿರುವುದು ಕಂಡುಬರುತ್ತದೆ. ಆದ್ದರಿಂದ ಗಾಂಧೀಜಿಯವರು ಒಬ್ಬ ಪರಿಸರವಾದಿಯಾಗಿದ್ದರೆಂಬುದು ಸ್ಪಷ್ಟವಾಗಿದೆ. ಪರಿಸರ ಪ್ರಜ್ಞೆಯು ಕೇವಲ ಕಳೆದ ನಾಲ್ಕು ದಶಕಗಳಿಂದ ಮಾತ್ರ ಹೆಚ್ಚು ಮಹತ್ವವನ್ನು ಪಡೆದುಕೊಳ್ಳುತ್ತಿರುವ ವಿಷಯವಾಗಿರುವುದರಿಂದ ಪರಿಸರ ಚಳುವಳಿಯಲ್ಲಿ ಗಾಂಧೀಜಿಯವರ ಸ್ಥಾನಮಾನಗಳು ಇತ್ತೀಚೆಗೆ ಗುರುತಿಸಲ್ಪಟ್ಟಿದೆ. 2003ರಲ್ಲಿ ಜುಲಿಯಾ.ಆರ್.ಮಿಲ್ಲರ್ರವರು ಸಂಪಾದಕರಾಗಿರುವ Encyclopedia of Human Ecologyಯಲ್ಲಿ ಪರಿಸರವಾದಿಯಾಗಿ ಗಾಂಧೀಜಿಯವರ ಪಾತ್ರವನ್ನು ಗುರುತಿಸಲಾಗಿದೆ.
ಒಂದು ದೇಶ ಸಮೃದ್ಧವಾಗಿ ಬೆಳೆದು, ಅಲ್ಲಿಯ ಜನಮನದಲ್ಲಿ ಹಚ್ಚಹಸಿರಾಗಿ ನೆಲೆಯೂರಬೇಕಾದರೆ, ಅಲ್ಲಿ ಸತ್ಯ, ನ್ಯಾಯ, ನೀತಿ, ಪ್ರೀತಿಗಳು ತಳಹದಿಯಾಗಿರಬೇಕು. ಅಂಥ ಗೌರವಕ್ಕೆ ಪಾತ್ರವಾದದ್ದು ಆಷ್ಟ್ರೇಲಿಯಾ ದೇಶವೆನ್ನಬಹುದು. ಸತ್ಯವೇ ದೇವರೆಂದು ಬಗೆಯುವ ಉದಾತ್ತ ಭಾವನೆ ಅಲ್ಲಿಯ ಜನತೆಯದು. ಆ ದೇಶದ ಜನಜೀವನಕ್ಕೆ ಸುಖ-ಶಾಂತಿಯೇ ಪ್ರಧಾನವಾಗಿದೆ. ಅದರಂತೆ ಅನ್ಯದೇಶಿಯರೂ ಪ್ರೀತಿ-ಸ್ನೇಹಗಳನ್ನು ಬೆಳೆಸಿಕೊಂಡು ಹೋಗಬೇಕೆಂಬುದೇ ಅವರ ತತ್ವವೂ, ಸಂಕಲ್ಪವೂ ಆಗಿದೆ.
ಸಮಾಜಶಾಸ್ತ್ರದಲ್ಲಿ ಪ್ರಸ್ತಾಪವಾಗುವ ಅನೇಕ ಮೂಲ ಕಲ್ಪನೆಗಳಲ್ಲಿ ಸಮುದಾಯವೂ ಒಂದು. ಸಮಾಜಶಾಸ್ತ್ರಜ್ಞರು, ಮಾನವಶಾಸ್ತ್ರಜ್ಞರು, ಅರ್ಥಶಾಸ್ತ್ರಜ್ಞರು, ಸಮಾಜಕಾರ್ಯಕರ್ತರು, ರಾಜಕಾರಣಿಗಳು, ಯೋಜಕರು, ಯೋಜನೆಗಳ ಅನುಷ್ಟಾನ ನಿಪುಣರು, ಹೀಗೆ ಹಲವು ಹತ್ತು ಜನ ಸಮುದಾಯವೆಂಬ ಶಬ್ದವನ್ನು ಉಪಯೋಗಿಸುತ್ತಾರೆ. ಹಾಗಾಗಿ ಒಂದೊಂದು ಗುಂಪಿನವರೂ ಸಮುದಾಯ ಶಬ್ದಕ್ಕೆ ಒಂದೊಂದು ಅರ್ಥವನ್ನು ಕಲ್ಪಿಸುತ್ತಾರೆ. ನಾವಿಲ್ಲಿ ಸಮುದಾಯ ಸಂಘಟನೆಯ ಹಿನ್ನೆಲೆಯಲ್ಲಿ ಸಮುದಾಯ ಶಬ್ದವನ್ನು ಅರ್ಥಮಾಡಿಕೊಳ್ಳಬೇಕಾಗಿದೆ.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರವು ಪ್ರಕಟಿಸಿರುವ ಜನಸಾಮಾನ್ಯರಿಗಾಗಿ ಕಾನೂನು ಮಾಹಿತಿ ಪುಸ್ತಕವು ಹೆಸರೇ ಸೂಚಿಸುವಂತೆ ಇದು ಜನಸಾಮಾನ್ಯರಿಗೆ ಅಂದರೆ ಕಾನೂನಿನ ಸಾಕ್ಷರತೆಯಿಲ್ಲದವರಿಗೆ, ಸಮಾಜದ ಮಧ್ಯಮ ಮತ್ತು ದುರ್ಬಲ ವರ್ಗದವರಿಗೆ, ಶೋಷಿತರಿಗೆ, ನಿರ್ಗತಿಕರಿಗೆ ಅನ್ಯಾಯವಾದಾಗ ಅವರಿಗೆ ಕಾನೂನು ಜ್ಞಾನವನ್ನು ಹೊಂದಲು, ಸಂವಿಧಾನವು ಹಾಗೂ ಇತರ ಶಾಸನಗಳು ಅವರಿಗೆ ಕೊಡಮಾಡಿರುವ ಹಕ್ಕುಗಳು ಮತ್ತು ಬಾಧ್ಯತೆಗಳ ಬಗ್ಗೆ ಮತ್ತು ಉಚಿತ ಕಾನೂನು ಸಲಹೆಗಳ ಬಗ್ಗೆ ತಿಳಿದುಕೊಂಡು ನ್ಯಾಯಕ್ಕಾಗಿ ಹೋರಾಡಲು ಮಾರ್ಗಸೂಚಿಯಾಗಿದೆ. ಪ್ರಸ್ತುತ ಈ ಪುಸಕ್ತದ ಐದು ಆವೃತ್ತಿಗಳು ಹೊರಬಂದಿದ್ದು. ಪರಿಷ್ಕೃತ ಐದನೇ ಆವೃತ್ತಿಯಲ್ಲಿ ಸನ್ಮಾನ್ಯರುಗಳಾದ ನ್ಯಾ. ಹೆಚ್.ಎಲ್. ದತ್ತು (ನ್ಯಾಯಾಧೀಶರು, ಭಾರತದ ಸರ್ವೋಚ್ಚ ನ್ಯಾಯಾಲಯ), ನ್ಯಾ. ವಿ. ಗೋಪಾಲ ಗೌಡ (ನ್ಯಾಯಾಧೀಶರು, ಭಾರತದ ಸರ್ವೋಚ್ಚ ನ್ಯಾಯಾಲಯ) ನ್ಯಾ. ಡಿ.ಎಚ್. ವಾಗೆಲ (ಮುಖ್ಯ ನ್ಯಾಯಾಧೀಶರು, ಕರ್ನಾಟಕದ ಉಚ್ಚ ನ್ಯಾಯಾಲಯ) ಮತ್ತು ನ್ಯಾ. ಎನ್.ಕೆ. ಪಾಟೀಲ್ (ನ್ಯಾಯಾಧೀಶರು, ಕರ್ನಾಟಕದ ಉಚ್ಚ ನ್ಯಾಯಾಲಯ ಮತ್ತು ಕಾರ್ಯನಿರ್ವಾಹಕ ಅಧ್ಯಕ್ಷರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ) ರವರು ಈ ಅತ್ಯುನ್ನತವಾದ ಪುಸ್ಕಕಕ್ಕೆ ಮುನ್ನುಡಿಯನ್ನು ಬರೆದು ಈ ಪುಸ್ತಕವು ಕಾನೂನಿನ ಸಾಕ್ಷರತೆಯಿಲ್ಲದವರಿಗೆ, ಸಮಾಜದ ಮಧ್ಯಮ ಮತ್ತು ದುರ್ಬಲ ವರ್ಗದವರಿಗೆ, ಶೋಷಿತರಿಗೆ, ನಿರ್ಗತಿಕರಿಗೆ ಅನ್ಯಾಯವಾದಾಗ ಅವರು ಯಾವ ರೀತಿ ಉಚಿತ ಕಾನೂನು ಸಲಹೆಯನ್ನು ಪಡೆದುಕೊಳ್ಳಬಹುದು ಎಂಬುದರ ಸಂಪೂರ್ಣ ಮಾಹಿತಿಯನ್ನು ನೀಡುತ್ತದೆ ಎಂಬುದನ್ನು ತಿಳಿಸಿದ್ದಾರೆ.
|
Categories
All
Social Work Learning AcademyMHR LEARNING ACADEMYGet it on Google Play store
50,000 HR PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS. |
SITE MAP
SiteTRAININGJOB |
HR SERVICESOTHER SERVICESnIRATHANKA CITIZENS CONNECT |
NIRATHANKAPOSHOUR OTHER WEBSITESSubscribe |
MHR LEARNING ACADEMY
50,000 HR AND SOCIAL WORK PROFESSIONALS ARE CONNECTED THROUGH OUR NIRATHANKA HR GROUPS.
YOU CAN ALSO JOIN AND PARTICIPATE IN OUR GROUP DISCUSSIONS.
YOU CAN ALSO JOIN AND PARTICIPATE IN OUR GROUP DISCUSSIONS.
|